Tuesday, October 25, 2016

All is fair in love and war

ಇದೊಂದು ಶತಮಾನಾಂತರಗಳಿಂದ ರೂಢಿಯಲ್ಲಿರುವ ಗಾದೆ. Love ಇಲ್ಲಿಯ ವಿಷಯವಲ್ಲ ಆದರೆ  War...ಹೌದು ಇದು ನಮ್ಮ ವಿಷಯ.
ಆದರೆ ಯುದ್ದದಲ್ಲೂ ಕೆಲವೊಂದು ನೀತಿಗಳನ್ನು ಸೃಷ್ಟಿಸಲಾಗಿದೆ.  ಅದಕ್ಕೂ ಒಂದು ಕೈಪಿಡಿಯನ್ನು ರಚಿಸಿದ್ದಾರೆ.  ಅಂತರಾಷ್ಟೀಯ ಮಟ್ಟದಲ್ಲಿ ಒಂದು ಒಪ್ಪಂದವಿದೆ. ಆದರೆ ಅದು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ ಎನ್ನುವುದು ಖಚಿತವಾಗಿ ಹೇಳಲಾಗುವುದಿಲ್ಲ. ಸೆರೆ ಹಿಡಿದ ಯುದ್ದಕೈದಿಗಳನ್ನು ಹೇಗೆ ನಡೆಸಿಕೊಳ್ಳಬೇಕೆಂಬುದಕ್ಕೂ ಒಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಒಪ್ಪಂದವಿದೆ ಅದಕ್ಕೆ Geneva Convention ಎಂದು ಹೇಳುತ್ತಾರೆ. ಯುದ್ದಕ್ಕಿಳಿದಿರುವ ಎರಡು ದೇಶಗಳ ನಡುವೆ ರಾಜಕೀಯವಾಗಿ ಒಂದು ಒಪ್ಪಂದವಾಗುವವರೆಗೂ ಈ ಯುದ್ದಕೈದಿಗಳನ್ನು ಕಾಯಿದೆಯನ್ವಯ ಸುರಕ್ಷಿತವಾಗಿಡಬೇಕು. ಅವರಿಗೆ ದೈಹಿಕವಾಗಿ ಯಾವ ಹಿಂಸೆಯನ್ನೂ ಕೊಡಬಾರದು,ಅವರಿಂದ ಮಾಹಿತಿ ಪಡೆಯುವ ಸಮಯದಲ್ಲಿ ಏನೇನು ಪ್ರಶ್ನೆಗಳನ್ನು ಕೇಳಬಹುದು ಎಂಬುವ ವಿವರಗಳೆಲ್ಲಾ ಈ ಒಂದು Convention ನಲ್ಲಿ ಇದೆ.
  1971 ರ ಭಾರತ ಮತ್ತು ಪಾಕೀಸ್ತಾನದ ಯುಧ್ಧದಲ್ಲಿ ವಿಜೇತವಾದ ಭಾರತ,ಸುಮಾರು 90 ಸಾವಿರ ಪಾಕಿಸ್ತಾನದ ಸೈನಿಕರನ್ನು ಯುಧ್ಧಕೈದಿಗಳಾಗಿ ವಶಪಡಿಸಿಕೊಂಡಿತು. ಇನ್ನೊಮ್ಮೆ ಓದಿ, 90 ಸಾವಿರ ಪಾಕಿ ಸೈನಿಕರನ್ನು ನಾವು ವಶಪಡಿಸಿಕೊಂಡಿದ್ದೆವು. ಆದರೆ ಸಿಮ್ಲಾ ಒಪ್ಪಂದದ ಪ್ರಕಾರ ಅವರನ್ನು ಕ್ಷಮಿಸಿ ಬಿಡುಗಡೆ ಮಾಡಿದೆವು. ಯಾಕೆ ?
  ಯಾಕೆಂದರೆ ಈ ಒಪ್ಪಂದಗಳಿಗೆ ಒಂದು ಅಂತರಾಷ್ಟ್ರೀಯ ಮಟ್ಟದ ಕಾನೂನಿನ ಚೌಕಟ್ಟು ಇರುತ್ತದೆ. ಅದನ್ನು ಪಾಲಿಸುವುದು  ಧರ್ಮ ಪಾಲನೆ.   ಅಧರ್ಮದ ಉದ್ದಟತನವನ್ನೂ ಮಾಡಬಹುದು ಮತ್ತು ಇಂತಹ ಕಾನೂನುಗಳಿಗೆ ಕ್ಯಾರೇ ಎನ್ನದೆ ತಮ್ಮ ಅಧರ್ಮದ ದಾರಿಯಲ್ಲೂ ಹೋಗಬಹುದು.

ಕೌರವ ಪಾಂಡವರ ಕುರುಕ್ಷೇತ್ರ ಯುದ್ದದಂತೆ.

ಹೀಗೆ ಕ್ಷಮಾಯಾಚನೆ ಪಡೆದು ಜೀವ ಉಳಿಸಿಕೊಂಡ ಪಾಕೀ ಸೈನಿಕನ ಆಂತರ್ಯ ಹೇಗಿರಬಹುದು....ಅವಮಾನದಿಂದ ಕುದ್ದು ಹೋದರು. ಏನಾದರೂ ಸರಿ ಪ್ರತೀಕಾರ ತೀರಿಸಿಕೊಳ್ಳಲೇಬೇಕು...
   ಅದಕ್ಕೇ, ಜೀವದಾನ ಮಾಡಿದ ಭಾರತೀಯ ಸೇನೆಯ ಮೇಲೆ ಅವರಿಗೆ ಎಲ್ಲಿಲ್ಲದ ದ್ವೇಷ.  ಅದಕ್ಕೇ ಅವರಿಗೆ ಗೊತ್ತಿರುವ,ಯಾವಾಗಲೂ ಪಾಲಿಸುವ ಅಧರ್ಮದ ದಾರಿ ‌ಹಿಡಿದರು.
    ಕ್ಯಾಪ್ಟನ್ ಸೌರಭ್ ಕಾಲಿಯಾ ಎನ್ನುವ ಯೋಧನ ಬಗ್ಗೆ ಓದಿರುವ ನೆನಪಿದೆಯೇ..
    ಹೇಳಿ ಏನು ನೆನಪಿದೆ....?

No comments:

Post a Comment