Showing posts with label Krishnadevaraaya. Show all posts
Showing posts with label Krishnadevaraaya. Show all posts

Wednesday, March 29, 2017

ಕುದುರೆ ಶೆಟ್ಟರು

         
 
             ಆಗಿನ್ನೂ ಕೃಷ್ಣದೇವರಾಯರ ಪಟ್ಟಾಭಿಷೇಕವಾಗಿರಲಿಲ್ಲ. ನಮ್ಮ ತಂದೆಯವರು ವಿಜಯನಗರದಿಂದ ಭಟ್ಕಳಕ್ಕೆ  ಮೊದಲ ಸಲ ನನ್ನನ್ನು ಕರೆದುಕೊಂಡು ಹೋಗಿದ್ದರು. ಒಂದು ತಿಂಗಳು ಭಟ್ಕಳದಲ್ಲಿದ್ದು ಅಲ್ಲಿಯ ಕುದುರೆ ವ್ಯಾಪಾರಿಗಳಿಗೆ ಪರಿಚಯಿಸಿದರು. ಅಲ್ಲಿಂದ ಹೊನ್ನಾವರ, ಅಂಕೋಲ ಮತ್ತು ಗೋವಾಕ್ಕೆ ಪ್ರಯಾಣಿಸುತ್ತಾ ಇನ್ನೊಂದು ತಿಂಗಳು ಕಳೆಯಿತು.
    ಮೂಲತಃ ನಾವು ವಿಜಯನಗರದಲ್ಲಿ ಸಾಂಬಾರ ದಿನಸಿಗಳ ವ್ಯಾಪಾರ ಮಾಡುತ್ತಿದ್ದೆವು. ಸುತ್ತ ಮುತ್ತಲಿನ ಪ್ರದೇಶಗಳಿಂದ ಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಲವಂಗಗಳನ್ನೆಲ್ಲಾ ಸಂಗ್ರಹಿಸಿ ಭಟ್ಕಳಕ್ಕೆ ಸಾಗಿಸಿ ಅಲ್ಲಿಯ ಮಾಪಿಳ್ಳರ ಮುಖಾಂತರ ಅರಬ್ಬೀ ದೇಶದ ಮತ್ತು ಪೋರ್ಚುಗೀಸಿನ ವರ್ತಕರಿಗೆ ಮಾರಾಟ ಮಾಡುತ್ತಿದ್ದೆವು. ಸಂಪಾದನೆಯೇನೋ ಚೆನ್ನಾಗೇ ಇತ್ತು. ನಮ್ಮ ತಂದೆ ರಾಮಲಿಂಗ ಶೆಟ್ಟರು ವ್ಯಾಪಾರ ವಲಯದಲ್ಲಿ ನಂಬಿಕಸ್ಥ ಮರ್ಯಾದಸ್ಥ, ಯಾರಿಗೂ ಮೋಸಮಾಡುವವರಲ್ಲ ಎನ್ನುವ ಹೆಸರು ಗಳಿಸಿದ್ದರು. ಆಗ ಒಂದು ಅಂದಾಜಿನ ಪ್ರಕಾರ ಸುಮಾರು ಇನ್ನೂರಕ್ಕೂ ಹೆಚ್ಚು ಬಂದರುಗಳಿದ್ದವಂತೆ ವಿಜಯನಗರ ಸಾಮ್ರಾಜ್ಯದಲ್ಲಿ. ಈ ಬಂದರುಗಳಲ್ಲಿ ಮಾಪಿಳ್ಳರದೇ ಮೇಲುಗೈ. ಇವರಲ್ಲಿ ಎರಡು ತರಹದ ಮಾಪಿಳ್ಳರಿದ್ದಾರೆ. ತಲತಲಾಂತರದಿಂದಲೂ ಅರಬ್ ವ್ಯಾಪಾರಿಗಳಿಗೆ ದುಬಾಷಿಗಳಾಗಿ, ದಲಾಲಿಗಳಾಗಿ ವ್ಯವಹರಿಸುತ್ತಿದ್ದ ಮುಸ್ಲೀಮ್ ಮಾಪಿಳ್ಳರು. ಇತ್ತೀಚಿಗೆ ಮತಾಂತರಗೊಂಡ ಕ್ರಿಶ್ಚಿಯನ್ ಮಾಪಿಳ್ಳರು. ಇವರನ್ನು ನಸರಾಣಿ ಮಾಪಿಳ್ಳರೂ ಅಂತಲೂ ಕರೆಯುತ್ತಾರೆ. ಈ ನಸರಾಣಿ ಮಾಪಿಳ್ಳರು ಪೋರ್ಚುಗೀಸರಿಗೆ ಹತ್ತಿರವಾದರು.
   
       ವಿಜಯನಗರ ಸಾಮ್ರಾಜ್ಯದ ಬಂದರುಗಳಲ್ಲಿ ಅತಿ ಹೆಚ್ಚು ಲಾಭದ ವ್ಯವಹಾರವೆಂದರೆ ಅರಬ್ಬೀದೇಶದ ಮತ್ತು ಯೂರೋಪಿನ ಹಲವಾರು ದೇಶಗಳಿಂದ ಬರುತ್ತಿದ್ದ ಕುದುರೆಗಳ ಮಾರಾಟ. ಇದರಲ್ಲಿ ಹೂಡಿಕೆಯೂ ದೊಡ್ಡ ಮೊತ್ತದಲ್ಲಿರುತ್ತದೆ ಹಾಗಾಗಿ ಸಣ್ಣಪುಟ್ಟ ವ್ಯಾಪಾರಿಗಳು ಇದಕ್ಕೆ ಕೈಹಾಕುವುದಕ್ಕೆ ಹೆದರುತ್ತಾರೆ.
         
           ನಮ್ಮ ತಾತನವರು 'ನಾನು ಕುದುರೆ ವ್ಯಾಪಾರ ಮಾಡುತ್ತೇನೆ' ಎಂದು ಹೇಳಿದಾಗ ಇಡೀ ಕುಟುಂಬವೇ ವಿರೋದಿಸಿದರಂತೆ. ಮೊಟ್ಟಮೊದಲ ಹೆದರಿಕೆ ಎಂದರೆ ಈ ವ್ಯವಹಾರದಲ್ಲಿ ಪ್ರವೇಶಿಸಿದವರನ್ನು ಮತಾಂತರ ಮಾಡುತ್ತಾರೆಂಬ ಮಾತು. ಕುದುರೆ ವ್ಯಾಪಾರ ಅರಬರ ಜೊತೆ ಮಾಡಬೇಕು ಎಂದರೆ ಮುಸ್ಲೀಮ್ ಮಾಪಿಳ್ಳನಾಗಿರಬೇಕು ಇಲ್ಲಾ ಪೋರ್ಚುಗೀಸರೊಂದಿಗೆ ವ್ಯವಹರಿಸಲು ನಸರಾಣಿ ಮಾಪಿಳ್ಳನಾಗಿರಬೇಕು. ಆದರೆ ನಮ್ಮ ತಾತನವರು ಮಾತ್ರ ಆಗಲೇ ಧೃಡನಿಶ್ಚಯ ಮಾಡಿಯಾಗಿತ್ತು...ಮತಾಂತರಕ್ಕೊಳಗಾಗದೆ ವ್ಯಾಪಾರ ಮಾಡುತ್ತೇನೆಂದು ಆಶ್ವಾಸನೆ ಕೊಟ್ಟರು. ಕುದುರೆ ವ್ಯಾಪಾರ ಅಷ್ಟು ಲಾಭದಾಯಕವಾಗಿತ್ತು. ಕುದುರೆಗಳ ಖರೀದಿಗೆ ಮುಂಗಡವಾಗಿ ಹಣಪಾವತಿ ಮಾಡಬೇಕು ಮತ್ತು ಕುದುರೆಗಳು ಬಂದಮೇಲೆ ಅಂದಿನ ಪರಿಸ್ಥಿತಿಗೆ ತಕ್ಕಂತೆ ಖರೀದಿದಾರಗೆ ಮಾರಬೇಕು. ಕೆಲವೊಮ್ಮೆ ಹೂಡಿಕೆಗಿಂತ ನಾಲ್ಕುಪಟ್ಟು ಲಾಭವಾಗುತ್ತಿತ್ತು ಮತ್ತೆ ಕೆಲವೊಮ್ಮೆ ಹೂಡಿಕೆಯ ಹಣವೂ ದಕ್ಕುತ್ತಿರಲಿಲ್ಲ.  ಕುದುರೆಗಳ ಮಾರಾಟ ರಾಜಕೀಯ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.
   
         ಕೃಷ್ಣದೇವರಾಯರ ಪಟ್ಟಾಭಿಷೇಕವಾದ ಮೇಲೆ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಗೋವಾದ ಬಂದರಿಗೆ ಬಂದಿಳಿದ ಕುದುರೆಗಳನ್ನು ಬಹಮನಿ ಸುಲ್ತಾನರ ಕಡೆಗೆ ಹೋಗದ ಹಾಗೆ ನೋಡಿಕೊಳ್ಳುವುದು ಮತ್ತು ಆ ಎಲ್ಲಾ ಕುದುರೆಗಳೂ ವಿಜಯನಗರದ ಸೈನ್ಯಕ್ಕೆ ಸೇರುವ ವ್ಯವಸ್ಥೆಯಾಗುವಂತೆ ಪೋರ್ಚುಗೀಸರ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಪೋರ್ಚುಗೀಸರಿಗೂ ಇವರ ಸೈನ್ಯದ ನೆರವು ಬೇಕಿತ್ತು ಹಾಗಾಗಿ ಒಂದು ಸಮತೂಲವಾದ ಒಪ್ಪಂದ ಮಾಡಿಕೊಂಡರು.
    ಧರ್ಮಭೀರುವಾದ ಕೃಷ್ಣದೇವರಿಗೆ ಚೆನ್ನಾಗಿ ಅರಿವಿತ್ತು ಪೋರ್ಚುಗೀಸರ ಹುನ್ನಾರ...ಇವರು ಬರೀ ವ್ಯಾಪಾರಕ್ಕೆಂದು ಬಂದವರಲ್ಲ. ಒಂದು ಕೈಯಲ್ಲಿ ಶಿಲುಬೆ ಒಂದು ಕೈಯಲ್ಲಿ ಖಡ್ಗ ಹಿಡಿದುಕೊಂಡೇ ಗೋವಾಕ್ಕೆ ಪ್ರವೇಶಿಸಿದ ಇವರು ಹಿಂದೂಗಳ ಮೇಲೆ ನಡೆಸಿದ ಮತಾಂತರ, ದೌರ್ಜನ್ಯದ ಬಗ್ಗೆ ಮಾಹಿತಿಯಿತ್ತು. ಆದರೆ ಗೋವಾದಲ್ಲಿ ಬಹಮನಿ ಸುಲ್ತಾನರನ್ನು ಸೋಲಿಸಿದ ಪೋರ್ಚುಗೀಸರು...ಶತ್ರುಗಳ ಶತ್ರುಗಳು..ಸದ್ಯಕ್ಕೆ ಮಿತ್ರರು!
        
ಪೋರ್ಚುಗೀಸರೊಂದಿಗೆ ವ್ಯವಹರಿಸಲು ಭಟ್ಕಳದ ಸಾಮಂತ ತಿಮ್ಮಯ್ಯನವರಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟುಬಿಟ್ಟಿದ್ದರು. ಅವರ ಪೂರ್ಣ ಗಮನ ಒಂದು ಬೃಹತ್ ಸೈನ್ಯವನ್ನು ಕಟ್ಟುವುದರ ಕಡೆಗೆ ಕೇಂದ್ರೀಕೃತವಾಗಿತ್ತು.
  
        ವಿಜಯನಗರದಲ್ಲಿ ನಡೆಯುತ್ತಿರುವ ಹಾಗುಹೋಗುಗಳ ಬಗ್ಗೆ ನಿಗಾ ಇಡಲು ಪೋರ್ಚುಗೀಸರು ಲೂಯಿಸ್ ಎನ್ನುವ ರಾಯಭಾರಿಯನ್ನು ಕಳುಹಿಸಿದ್ದರು ಆದರೆ ಕೆಲವು ತಿಂಗಳುಗಳಲ್ಲಿ ಇವರು ಅನುಮಾನಾಸ್ಪದ ಸಂದರ್ಭದಲ್ಲಿ ಹತರಾದರು. ಮುಸ್ಲೀಮರ ಯುವಕನೊಬ್ಬ ಇವರನ್ನು ಹತ್ಯೆಗೈದು ತಪ್ಪಿಸಿಕೊಂಡು ಓಡಿಹೋಗಿದ್ದಾನೆಂಬ ಮಾಹಿತಿ ಗೋವಾಕ್ಕೆ ಮುಟ್ಟಿಸಲಾಯಿತು. ಆದರೆ ನಡೆದಿದ್ದೇ ಬೇರೆ. ಗೋವಾದಿಂದ ಕುದುರೆಗಳು ಬೇರಲ್ಲಿಗೋ ರವಾನೆಯಾಗಿ  ಅಂತಿಮವಾಗಿ ಬಹಮನಿ ತುರುಕರ ಕೈವಶವಾಗುತ್ತಿವೆ ಎಂಬ ಮಾಹಿತಿ ಬೇಹುಗಾರರ ಮೂಲಕ ಕೃಷ್ಣದೇವರಾಯರಿಗೆ ವಿಷಯ ತಿಳಿಯಿತು. ಹೊನ್ನಾವರ ಮತ್ತು ಭಟ್ಕಳದ ಸಾಮಂತರ ಜೊತೆ ಈ ವಿಷಯವನ್ನು ನಿಷ್ಕರ್ಶಿಸಿ ಒಂದು ವ್ಯೂಹದ ರಚನೆ ಮಾಡಿದ್ದರು. ವಿಜಯನಗರಕ್ಕೆ ಬೇಕಾದ ಇಪ್ಪತ್ತು ಸಾವಿರ ಕುದುರೆಗಳು ದೊರತಕೂಡಲೇ ಗೋವಾವನ್ನು ಪೋರ್ಚುಗೀಸರಿಂದ ಮುಕ್ತಗೊಳಿಸುವುದು. ಇದಕ್ಕೆಂದೇ ಹಲವಾರು ಸಾಮಂತರಿಗೆ ಸೇನೆಯ ಅವಶ್ಯಕತೆಯ ಪಟ್ಟಿಯನ್ನಾಗಲೇ ಗುಪ್ತವಾಗಿ ಕಳುಹಿಸಿ ಕೊಟ್ಟಿದ್ದರಂತೆ. ಆದರೇ ಈ ವಿಷಯ ಹೇಗೋ ರಾಯಭಾರಿಗೆ ಗೊತ್ತಾಗಿಬಿಟ್ಟಿದೆ. ಇನ್ನೇನು ಗೋವಾದ ವೈಸರಾಯಿಗೆ ಈ ವಿಷಯ ರವಾನಿಸುವುದರಲ್ಲೇ ಇದ್ದರು ಅವರೇ ರವಾನಿಯಾಗಿ ಬಿಟ್ಟರು!

Monday, March 27, 2017

ಧರ್ಮೋ ರಕ್ಷತಿ ರಕ್ಷಿತಃ




ಕೃಷ್ಣದೇವರಾಯರ ಜೊತೆ ಇದು ಏಳನೇ ಸಲ ನಾನು ತಿರುಪತಿಗೆ ಹೋಗುತ್ತಿರುವುದು. ಪ್ರತಿಯೊಂದು ಸಲ ಹೋದಾಗಲೂ ಅದೊಂದು ಅಧ್ಭುತ ಅನುಭವ. ಮೊದಲ ಸಲ ನಮ್ಮ ತಂದೆ ಶ್ಯಾಮಾಶರ್ಮರ ಮೇಲ್ವಿಚಾರಣೆಯಲ್ಲಿ ನಾವು ಮೂವರು ವಿದ್ಯಾರ್ಥಿಗಳುರಾಯರ ಜೊತೆ ತಿರುಪತಿಯ ತೀರ್ಥಯಾತ್ರೆಗೆ ಆಯ್ಕೆಯಾಗಿದ್ದೆವು.
      ದೇವರಾಯರು ಇತರೆ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡಾಗ ಅವರ ಜೊತೆ ಹೋಗಲು ಯೊಗ್ಯವಾದ ಒಂದು ತಂಡವನ್ನು ಸ್ಪರ್ಧೆಯ ಮುಖಾಂತರ ಆಯ್ಕೆ ಮಾಡಲಾಗುತ್ತಿತ್ತು.

ತಿರುಪತಿಯ ತಂಡದಲ್ಲಿದ್ದವರಿಗೆ ಕನ್ನಡ, ತೆಲುಗು ಮತ್ತು ಸಂಸ್ಕೃತ ಚೆನ್ನಾಗಿ ಗೊತ್ತಿರಬೇಕು. ಕೆಲವೊಮ್ಮೆ ಪುರಂದರದಾಸರೂ ಬರುತ್ತಿದ್ದರು, ಹಾಗಾಗಿ ಅವರ ದೇವರನಾಮಗಳನ್ನು ಸುಶ್ರಾವ್ಯವಾಗಿ ಹಾಡಲು ಬರಬೇಕು. ಎಲ್ಲದಿಕ್ಕಿಂತ ಮಿಗಿಲಾಗಿ ಧಾರ್ಮಿಕ ವಿಷಯಗಳನ್ನು ಅದರಲ್ಲೂ ತಿರುಪತಿಯ ಬಗ್ಗೆ ವಿಷೇಶವಾಗಿ ತಿಳಿದು ಕೊಂಡಿರಬೇಕು ಏಕೆಂದರೆ ಈ ತೀರ್ಥಯಾತ್ರೆಯ ಸಮಯದಲ್ಲೇ ಕೃಷ್ಣದೇವರಾಯರು ತಮ್ಮ 'ಅಮುಕ್ತಮಲ್ಯದ' ರಚತೆಯಲ್ಲಿ ತೊಡಗುತ್ತಿದ್ದರು.

      ಕೃಷ್ಣದೇವರಾಯರಿಗೊಮ್ಮೆ ಕನಸಿನಲ್ಲಿ ವಿಷ್ಣುದೇವರು ಪ್ರತ್ಯಕ್ಷವಾಗಿ ಅವರ ಮತ್ತು 'ಆಂಡಾಳಮ್ಮನವರ' ವಿವಾಹದ ಬಗ್ಗೆ ಬರೆಯಲು ಆದೇಶಿದ್ದರಂತೆ ಆ ಅಧ್ಭುತ ಕೃತಿಯೇ 'ಆಮುಕ್ತಮಲ್ಯದ' ಇದರ ರಚನೆಗೆ ಕೆಲವೊಮ್ಮೆ ನಮ್ಮ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ಇದಕ್ಕೆ ತೆಲುಗಿನ ಅಣ್ಣಮಯ್ಯನವರ ಪದಗಳ ಪರಿಚಯವೂ ಇರಬೇಕಿತ್ತು..ಹಾಗಾಗಿ ನಾವು ಅವರ ಸಾಹಿತ್ಯರಚನೆಯ ಗುಂಪಿನ ಸದಸ್ಯರಾಗಿದ್ದೆವು.
 
     ತಿರುಪತಿ ತಲುಪಿದಮೇಲೆ ನಮ್ಮ ಜವಾಬ್ದಾರಿಗಳು ಇನ್ನೂ ಹೆಚ್ಚಾಗುತ್ತಿದ್ದವು. ಪ್ರತಿಸಲ ಬಂದಾಗಲೂ ದೇವಸ್ಥಾನಕ್ಕೆ ಕೊಡುವ ಅನುದಾನದ ವಿವರಗಳನ್ನು ತಯಾರಿಸಬೇಕಾಗಿತ್ತು. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅವರ ಅವಶ್ಯತೆಗಳನ್ನು ಆಗಿಂದ್ದಾಗ್ಗೇ ಪೂರೈಸುತ್ತಿದ್ದೆವು. ಯಾತ್ರಾರ್ತಿಗಳಿಗೆ ವಸತಿಗೃಹ ನಿರ್ಮಾಣ, ಅನ್ನ ಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಇತರೆ ದೇವಸ್ತಾನಗಳಿಗೆ ಪ್ರಯಾಣದ ವ್ಯವಸ್ಥೆ ಮಾಡಿ ಇದರ ವರದಿಯನ್ನು ಸಾಯಂಕಾಲದ ಗಾನಸಭೆ ಮುಗಿದ ನಂತರ ಕೃಷ್ಣದೇವರಾಯರಿಗೆ ವರದಿ ಸಲ್ಲಿಸ ಬೇಕಾಗಿತ್ತು.
 
     ಮೊದಲ ಸಲತಿರುಪತಿಗೆ  ಬಂದಾಗ ವ್ಯಾಸತೀರ್ಥರು ಇಲ್ಲೇ ನೆಲಸಿದ್ದರು. ರಾಯರು ಅವರನ್ನು ವಿಜಯನಗರಕ್ಕೆ ಆಹ್ವಾನಿಸಿದರು. ಮೊದಲು ತಿರುಪತಿಯನ್ನು ಬಿಟ್ಟುಬರಲು ನಿರಾಕರಿಸಿದ್ದರು ಆದರೆ ಕೃಷ್ಣದೇವರಾಯರು ತಾವು ನಿರಂತರವಾಗಿ ನಡೆಸುತ್ತಿರುವ ಧರ್ಮಸಂರಕ್ಷಣೆಯ ಯುಧ್ಧದ ಬಗ್ಗೆ ಅರಿವು ಮಾಡಿಕೊಟ್ಟಮೇಲೆ ಆಹ್ವಾನವನ್ನು ಸ್ವೀಕರಿಸಿ ವಿಜಯನಗರಕ್ಕೆ ಬಂದರು ಮತ್ತು ಅಲ್ಲೇ ನೆಲಸಿಬಿಟ್ಟರು.
 
     ಉತ್ತರದಲ್ಲಾಗಲೇ ಮುಸ್ಲೀಮ್ ಮತಾಂಧರು ಅಟ್ಟಹಾಸದಿಂದ ಮೆರೆಯುತ್ತಿದ್ದರು.
     "ಕೃಷ್ಣಾನದಿಯಿಂದ ದಕ್ಷಿಣಕ್ಕೆ ಅವರು ಬಾರದಂತೆ ನಾನು ನೋಡಿಕೊಳ್ಳುತ್ತೇನೆ ನೀವು ನಮ್ಮ ಪ್ರಜೆಗಳು ಧರ್ಮದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಿ ನಮ್ಮ ಸನಾತನ ಧರ್ಮವನ್ನು ಕಾಪಾಡುವಂತೆ ಮಾರ್ಗದರ್ಶನ ಮಾಡಿ"  ಎಂದು ಕೋರಿಕೊಂಡ ಮೇಲೆ ವ್ಯಾಸತೀರ್ಥರು, ಪುರಂದರದಾಸರು ಮತ್ತು ಕನಕದಾಸರು ಸೇರಿಕೊಂಡು ದಾಸ ಸಾಹಿತ್ಯದ ಹುಟ್ಟು ಹಾಕಿದರು.

    ದೇವಭಾಷೆಯಾದ ಸಂಸ್ಕೃತದಲ್ಲಿ ಹುದುಗಿಹೋಗಿದ್ದ ವೇದ, ಉಪನಿಷತ್ತುಗಳ ತಿರುಳನ್ನು ಆಡುಭಾಷೆಯಾದ ಕನ್ನಡಕ್ಕೆ ದೇವರನಾಮಗಳ ಮೂಲಕ, ಸಂಗೀತದ ಮೂಲಕ ಸರಳವಾದ ರೀತಿಯಲ್ಲಿ ಜನರಿಗೆ ಮನದಟ್ಟುವ ಹಾಗೆ ಹೊರತಂದರು. ದೇವಸ್ಥಾನಗಳನ್ನು ಒಂದು ಸಾಂಸ್ಕೃತಿಕ ಕೇಂದ್ರವಾಗಿ ಪರಿವರ್ತಿಸಿದರು. ಶ್ರೀಶೈಲ, ಶ್ರೀರಂಗ, ಮೇಲುಕೋಟೆ,ಹರಿಹರ, ಉಡುಪಿ ಮುಂತಾದ ಅನೇಕ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳಲು ಪ್ರೋತ್ಸಾಹಿಸಿದರು. ವಿಜಯನಗರ ಸಾಮ್ರಾಜ್ಯದ ಉದ್ದಗಲಕ್ಕೂ ವಿರೂಪಾಕ್ಷ, ವಿಟ್ಟಲ, ರಾಮ, ಕೃಷ್ಣರ ಮತ್ತು ಅವರವರ ಗ್ರಾಮದೇವರುಗಳ  ದೇವಸ್ಥಾನಗಳನ್ನು ಕಟ್ಟಿಸಿದರು.
 
    ಜನಗಳಲ್ಲಿ ತಮ್ಮ ತಮ್ಮ ಜಾತಿಗಳ ಬಗ್ಗೆ ಇದ್ದ ಸಂಕುಚಿತ ನಿಲುವನ್ನು ಸಾಕಷ್ಟು ಮಟ್ಟಿಗೆ ದೂರಮಾಡಿದರು. ದೇವರನಾಮಗಳಲ್ಲೇ ಸಾಮಾಜಿಕ ಚಳುವಳಿ ನಡೆಯತೊಡಗಿತು. ಸಂಗೀತಸುಧೆಯ ಜೊತೆಗೆ ಭಕ್ತಿಸಾರದ ಹೊಳೆಯೇ ಹರಿಯತೊಡಗಿತು. ಹಳ್ಳಿ ಹಳ್ಳಿಗಳಲ್ಲೂ ಮಠಗಳು ಉಧ್ಭವವಾದವು, ಜನಗಳಲ್ಲಿ ಧಾರ್ಮಿಕ ಪ್ರವೃತ್ತಿ ಬೆಳೆಯುತ್ತಾ ಹೋಯಿತು.  ನಾವೇನೋ ಬ್ರಾಹ್ಮಣರು..ವೇದಾದ್ಯಯನ, ಪೂಜೆ ಪುನಸ್ಕಾರಗಳು ನಮಗೆ ಪರಂಪರಾಗತವಾಗಿ ಕಲಿಸಲಾಗಿದೆ, ಅದೇ ನಮ್ಮ ಜೀವನಾಧಾರವೂ ಕೂಡ. ಧರ್ಮ ಪಾಲನೆ ನಮ್ಮ ವೃತ್ತಿ.
    ಕೃಷ್ಣದೇವರಾಯರು ತಮ್ಮ ಜೀವನದ ಒಂದು ಪಾತ್ರದಲ್ಲಿ  ಯೋಧನಾಗಿ ಯುಧ್ಧಭೂಮಿಯಲ್ಲಿ ಹೋರಾಡುತ್ತಾ, ಮಾರಣಹೋಮ ನಡೆಸುತ್ತಾ ಇತರೆ ಮತಾಂಧರಿಂದ ಸನಾತನ ಧರ್ಮಕ್ಕೆ ಧಕ್ಕೆಯಾಗದಂತೆ ರಕ್ಷಿಸುತ್ತಿದ್ದರೆ ಇನ್ನೊಂದು ಪಾತ್ರದಲ್ಲಿ ತಾವೇ ಗುರುಗಳಲ್ಲಿ ರಾಜಗುರುವಾಗಿ, ಪುರೋಹಿತರಲ್ಲಿ ಮುಖ್ಯ ಪುರೋಹಿತರಾಗಿ, ಸಾಹಿತಿಗಳಲ್ಲಿ ಮೇರು ಸಾಹಿತಿಯಾಗಿ ಮೆರೆಯುತ್ತಿದ್ದಾರೆ.
    ಸಮುದ್ರ ಮಾರ್ಗದಿಂದ ವ್ಯಾಪಾರದ ನೆಪದಲ್ಲಿ ಕುಯುಕ್ತಿಯಿಂದ ಬರುವ ಮತಾಂಧರನ್ನೂ ನಮ್ಮ ಧರ್ಮಕ್ಕೆ ಸೋಂಕು ತಗಲಿಸದಂತೆ ಹಿಮ್ಮೆಟ್ಟಬೇಕಿದೆ...ಆದರೆ ನಮ್ಮ ನಮ್ಮ ಜಾತಿಯ ಕೆಲವು ಸಂಕುಚಿತ ಅಂಶಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಈ ಅವಕಾಶವಾದಿಗಳು ವಿಷದಬೀಜ ಬಿತ್ತಿಬಿಡಬಹುದು.
    ಒಂದು ಪ್ರಶ್ನೆ ಸದಾ ನನ್ನನ್ನು ಕಾಡುತ್ತಿತ್ತು..ನಾವೇಕೆ ಇವರ ಹಾಗೆ ನಮ್ಮ ಧರ್ಮದ ಬಲವಂತ ಪ್ರಚಾರ ಮಾಡುತ್ತಿಲ್ಲ? ಅದಕ್ಕೆ ನಮ್ಮ ತಂದೆ ಶ್ಯಾಮಾಶರ್ಮರ ಉತ್ತರದಿಂದ ಸ್ವಲ್ಪ ಸಮಾಧಾನವಾಯಿತು.
    " ನಮ್ಮ ಸನಾತನ ಧರ್ಮಕ್ಕೆ ಮಾತೃಸ್ಥಾನ ಕೊಟ್ಟು ಗೌರವಿಸುತ್ತೇವೆ...ಮತ್ತೆ ತಾಯಿಯನ್ನು ಮಾರಿಕೊಳ್ಳುವುದೇ..?"ಐ